ಆನ್ಲೈನ್ನಲ್ಲಿ ಇನ್ಸಪೆಕ್ಟರ್ ಹಣ ವರ್ಗಾವಣೆ 8.25 ಲಕ್ಷ ವಂಚನೆ
ಧಾರವಾಡ ಇನ್ಸಪೆಕ್ಟರ್ ಮೇಲೆ ಬಿತ್ತು ಕಳ್ಳರ ಕಣ್ಣು..?
ಧಾರವಾಡ: ಉಪನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದಯಾನಂದ ಶೇಗುಣಸಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 78.25 ಲಕ್ಷ , ಅವರ ಗಮನಕ್ಕೆ ಬರದೆ ಆನ್ಲೈನ್ಲ್ಲಿ ವರ್ಗಾವಣೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ಸಪೆಕ್ಟರ ದಯಾನಂದ ಯಾರ ಜೊತೆಯೂ ಮಾಹಿತಿ ಹಂಚಿಕೊಳ್ಳದಿದ್ದರೂ ಸಹ ಹಣ ವರ್ಗಾವಣೆಯಾಗಿದ್ದು , ಆತಂಕಕ್ಕೆ ಕಾರಣವಾಗಿದೆ . ಬ್ಯಾಂಕ್ನವರು ಸುರಕ್ಷಿತ ಇರುವ ಭದ್ರತೆ ಬಗ್ಗೆ ಹೊಂದಿದ ನಿಷ್ಕಾಳಜಿಯಿಂದ ಅಥವಾ ಯಾವುದೋ ಅಧಿಕಾರಿಯ ಹಸ್ತಕ್ಷೇಪದಿಂದ ಅಪರಿಚಿತ ವ್ಯಕ್ತಿ ಹಣ ವರ್ಗಾಯಿಸಿಕೊಂಡಿದ್ದಾನೆ ಅನ್ನೋ ಅನುಮಾನ ಮೂಡಿದೆ.
ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್ ಸ್ವಿಚ್ ಆಫ್ ಆಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ 50 ಸಾವಿರದಂತೆ 12 ಬಾರಿ , 45 ಸಾವಿರ ಮೂರು ಬಾರಿ , 25 ಸಾವಿರ ಎರಡು ಬಾರಿ ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ .