Spread the love

ಧಾರವಾಡ : ನಗರದ ಸಂಗಮ್ ಸಕ೯ಲ್ ವಿಮಲ್ ಹೊಟೇಲ್‌ನಲ್ಲಿ ಅಡುಗೆ ಭಟ್ಟನಾಗಿದ್ದ ವ್ಯಕ್ತಿಯನ್ನ ಅದೇ ಹೊಟೇಲ್‌ನಲ್ಲಿ ಮಾಣಿ ಆಗಿ ಕೆಲಸ ಮಾಡುತ್ತಿದ್ದವ ಕಬ್ಬಿಣದ ಸಲಾಕೆ ನಿಂದ ಹೊಡೆದು ಹತ್ಯೆ ಮಾಡಿರುವ ಪ್ರಕರಣ ಬೆಳಗಿನ ಜಾವ ಬೆಳಕಿಗೆ ಬಂದಿದೆ.

ಎಗ್‌ರೈಸ್‌ನಿಂದ ಆರಂಭಗೊಂಡಿದ್ದ ವಿಮಲ್ ಹೊಟೇಲ್ ಇಂದಿಗೂ ತನ್ನ ಗ್ರಾಹಕರಿಗೆ ಉತ್ತಮ ಸೇವೆ ಕೊಡುತ್ತ ಬಂದಿದ್ದು, ಇಂತಹ ಹೊಟೇಲ್‌ನ ಕೆಲಸಗಾರರು ಇರುವ ಕೋಣೆಯಲ್ಲಿ ಇಂತಹ ಘಟನೆ ಸಂಭವಿಸಿದೆ.

ಹತ್ಯೆಗೀಡಾದವನನ್ನು ಶಿರಹಟ್ಟಿ ತಾಲೂಕಿನ ಸುಗನಳ್ಳಿ ಗ್ರಾಮದ ಫಕೀರೇಶ ಪ್ಯಾಟಿ ಎಂದು ಗುರುತಿಸಲಾಗಿದ್ದು, ಆರೋಪಿಯು ತಮಿಳುನಾಡು ಮೂಲದ ಕನೈಯಪ್ಪ ಕನಯ್ಯ ಕೇ ಎನ್ನಲಾಗಿದೆ. ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು.
ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹತ್ಯೆಗೆ ನಿಖರವಾದ ಕಾರಣವನ್ನ ತಿಳಿದುಕೊಳ್ಳುವ ಪ್ರಯತ್ನ ನಡೆಸುತಿದ್ದಾರೆ.