Spread the love

ಧಾರವಾಡ : ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ವಿದ್ಯುತ್ ಕಾಯ್ದೆ 2023 ರನ್ನು ರದ್ದುಗೊಳಿಸಲು ಮತ್ತು ರೈತರ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆಗಾಗಿ ಆಗ್ರಹಿಸಿ ಧಾರವಾಡ ತಾಲೂಕಿನ ಮಾವಿನ ಕೊಪ್ಪ ಗ್ರಾಮದಲ್ಲಿ ಪ್ರತಿಭಟನೆ ಮಾಡಲಾಯಿತು

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡುತ್ತಾ 2021ರಲ್ಲಿ ದೆಹಲಿಯ ಗಡಿಗಳಲ್ಲಿ ನಡೆದ ರೈತರ ಹೋರಾಟವು ಇಡೀ ಜಗತ್ತಿಗೆ ಹೊಸ ಪಾಠವನ್ನು ಕಲಿಸಿದೆ, ಅದೇನೆಂದರೆ ಯಾವುದೇ ಸಮಸ್ಯೆಗಳಿಗಾಗಲಿ ಹೋರಾಟದಿಂದ ಮಾತ್ರ ಪಾರಿಹಾರ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ. ಆ ಹೋರಾಟದಕ್ಕೆ ಮಣಿದಿದ್ದ ಕೇಂದ್ರ ಸರ್ಕಾರ ಬೆಂಬಲ ಬೆಲೆಯನ್ನು ಕಾನೂನು ಮಾಡುವುದಾಗಿ ನೀಡಿದ್ದ ವಾಗ್ದಾನವನ್ನು ಮುರಿದುಹಾಕಿದ್ದಾರೆ. ಈಗ ವಿದ್ಯುತ್ ಅನ್ನು ಖಾಸಗೀಕರಣ ಮಾಡುವ ವಿದ್ಯುತ್ ಕಾಯ್ದೆ 2023ರನ್ನು ಜಾರಿಗೆ ತರುತ್ತಿದ್ದಾರೆ. ಒಟ್ಟಾರೆ ಇಂದು ಎಲ್ಲಾ ಪಕ್ಷಗಳು ಸಹ ಇಂದು ರೈತರ ಸಮಸ್ಯೆಗಳನ್ನು ಕಡೆಗಣಿಸಿದ್ದಾರೆ. ಇದರ ವಿರುದ್ಧ ಇಂದು ಸಂಯುಕ್ತ ಕಿಸಾನ್ ಮೋರ್ಚಾದಿಂದ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ, ಇದರ ಹಿನ್ನಲೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕದಿಂದ ಇಂದು ಸಾಕೇತಿಕ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ, ಮುಂದಿನ ದಿನಗಳಲ್ಲಿ ಹೋರಾಟವನ್ನು ತೀರಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಎಐಕೆಕೆಎoಎಸ್ ನ ಜಿಲ್ಲಾ ಉಪಾಧ್ಯಕ್ಷರಾದ ಹನುಮೇಶ ಹುಡೇದ,ರಸುಲ್ ನದಾಫ್ ಕೃಷ್ಣ ಅಮಿ ಜಾನ್ ಅಲ್ಲಮ್ಮ ಹೋಲ್ತಕೋಟಿ ದಿವಾನ್ ಸಾಬ್ ತುಮಕಿ ವಿಠ್ಠಲ ಹಲ್ಮನಿ ಶಿವಾಜಿ ಮಂಜು ಇತರರು ಇದ್ದರು