Spread the love

ಹುಬ್ಬಳ್ಳಿ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಕುಲದಲ್ಲಿ
75ನೇ ಗಣರಾಜ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಶಾಲಾ ಧ್ವಜಾರೋಹಣವನ್ನು ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಹನುಮಂತ ಚ ಉಣಕಲ್ ಗೈದರು,ರೌಂಡ್ ಟೇಬಲ್ ಇಂಡಿಯಾ ಎಚ್.ಕೆ.ಆರ್.ಟಿ. 178 ಎರಿಯಾ ಚೇರಮನ್ ವೀಪಲ ಭೂತದ, ಪ್ರಕಾಶ್ ಬದ್ಧಿ, ಶ್ರೀಪತಿ ಚೌವ್ಹಾಣ್, ನಿತೀನ್ ಮೆಹರವಾಡೆ, ಇವರು ಶಾಲಾ ಮಕ್ಕಳಿಗೆ ಬುಕ್ ಪೇನ್ ಸಿಹಿ ವಿತರಿಸಿದರು.
ಶಾಲಾ ಸಮಿತಿ ಸದಸ್ಯರು, ಮಹಾದೇವಪ್ಪ ಪೂಜಾರ, ಹನುಮಂತ ಭೀ ಉಣಕಲ್, ಬಸಪ್ಪ ಯಲಿಗಾರ, ರಾಮಣ್ಣ ಉಣಕಲ್, ಅಶೋಕ್ ಮ್ಯಾಗೇರಿ, ಕಲ್ಲಪ್ಪ ಗುಡಿಹಾಳ, ಶೇಖು ಬ್ಯಾಹಟ್ಟಿ, ಗುರುಗಳು, ಗುರುಮಾತೇಯರು, ಗ್ರಾಮದ ಹಿರಿಯರು, ಪಾಲಕರು, ಶಾಲೆಯ ಮಕ್ಕಳು, ಸಂದರ್ಭದಲ್ಲಿ ಉಪಸ್ಥಿತರಿದ್ದರು.