Spread the love

ಧಾರವಾಡ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಧವಳಗಿರಿ, ಧಾರವಾಡದಲ್ಲಿ 75 ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಗ್ರೂಪ್ ಕ್ಯಾಪ್ಟನ್. ಸಂಜಯ್ ದೇಸಾಯಿ (IAF ಇಂಜಿನಿಯರಿಂಗ್ ಸೇವಾ ಅಧಿಕಾರಿ ನವದೆಹಲಿ )ಮುಖ್ಯ ಅತಿಥಿಯಾಗಿ ಆಗಮಿಸಿದ್ದರು, ಧ್ವಜಾರೋಹಣ ನೆರವೇರಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು. ಸಮರ್ಪಣೆ, ಸಮಗ್ರತೆ, ಶಿಸ್ತು ಮತ್ತು ದೇಶದ ಮೇಲಿನ ಪ್ರೀತಿಯ ಪ್ರಮುಖ ಮೌಲ್ಯಗಳನ್ನು ಅವರು ಸಶಸ್ತ್ರ ಪಡೆಗಳ ಪ್ರಮುಖ ಮೌಲ್ಯಗಳು ಮತ್ತು ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಬೆಳೆಯಲು ಈ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವನ್ನು ಪ್ರಸ್ತಾಪಿಸಿದರು.
ಪ್ರಾಂಶುಪಾಲ ಡಾ.ಕೆ.ಗೋಪಿನಾಥ್ ಸ್ವಾಗತ ಭಾಷಣ ಮಾಡಿ, ಕಾಲೇಜಿನ ಕಳೆದ ವರ್ಷದ ಗಮನಾರ್ಹ ಸಾಧನೆಗಳ ಅವಲೋಕನ ಮಾಡಿದರು.ಎಲ್.ಶ್ರೀ ಜೀವಂಧರ್ ಕುಮಾರ್, ಕಾರ್ಯದರ್ಶಿ, ಎಸ್ಡಿಎಂಇ ಸೊಸೈಟಿ, ಧಾರವಾಡ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ.ವಿಜಯ್ ಶಿನ್ವಣ್ಣವರ್ ಮಾಸ್ಟರ್ ಆಫ್ ಸೆರಿಮನಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರೊ.ವಿ.ಕೆ.ಪಾರ್ವತಿ, . ಪ್ರಸ್ತಾವನೆಗೈದು ವಂದಿಸಿದರು.