Spread the love

ಧಾರವಾಡ  : ಬನದ ಹುಣ್ಣಿಮೆ ನಿಮಿತ್ಯವಾಗಿ ಇಂದು ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಪಲ್ಲಕ್ಕಿ ಉತ್ಸವವು ಶಹರದ ಕಾಮನಕಟ್ಟಿ ಚರಂತಿಮಠ ಗಾರ್ಡನದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಜರುಗಿತು.

ಬೆಳಗ್ಗೆ ಕಾಕಡಾರತಿ, ಅಭಿಷೇಕ, ಕುಂಕುಮಾರ್ಚನೆ, ಹೋಮ, ಹವನ ದೇವಿಗೆ ವಿಶೇಷ ಪೂಜೆ ಹಾಗೂ ಮಂತ್ರ ಪಠಣ ನಡೆಯಿತು. ಪಲ್ಲಕ್ಕಿ ಉತ್ಸವದ ಪೂಜೆಯನ್ನು ವನ್ಸ್ಪತಿ ಔಷದಿ ತಜ್ಞ ರಮೇಶ್ ಜಾನಕಿ ನೆರವೇರಿಸಿದರು. ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಕ್ಕೆಸುಧಾ ಕಬ್ಬುರ ಹಾಗೂ ಕುಂಭಮೇಳ ಪಂಜಿನ ಪ್ರದಕ್ಷಿಣಿಗೆ ವಾಣಿಶ್ರೀ ಮೋಟೆಕರ್ ಚಾಲನೇ ನೀಡಿದರು. ದೇವಸ್ಥಾನದ ಆವರಣದಿಂದ ಹೊರಟ ವಾದ್ಯ ಹಾಗೂ ಕಲಾ ಮೇಳದೊಂದಿಗೆ ದೇವಿ ವಿಗ್ರಹ ಹಾಗೂ ಗೃಂಥಗಳ ಮೆರವಣಿಗೆಯನ್ನು ಬಸoತಿ ಹಪ್ಪಳದ ಉದ್ಘಾಟಿಸಿದರು.

ಹೆಬ್ಬಳ್ಳಿ ಅಗಸಿ ರಸ್ತೆಯಲ್ಲಿರುವ ಜ್ಯೋತಿಬಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ವಿವಿಧ ಬಡಾವಣೆಯ ಮುಖ್ಯ ರಸ್ತೆ ಮೂಲಕ ಸಂಚರಿಸಿ ಮರಳಿ ಶ್ರೀ ಬನಶಂಕರಿ ದೇವಸ್ಥಾನ ತಲುಪಿತು. ನಂತರ ಲತಾ ಮಂಟ ಸುಮಂಗಲೆಯರಿAದ ಮಂತ್ರ ಪಠಣ ಪೂಜೆ ನೆರವೇರಿಸಿ ಮಹಾಪ್ರಸಾದ ಜರುಗಿಸಿದರು ಈ ಸಂದರ್ಭದಲ್ಲಿ ದೇವಸ್ಥಾನದ ಸದ್ಭಕ್ತರು ಹಾಗೂ ಉತ್ಸವ ಸಮಿತಿ ಸದಸ್ಯರು ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾದರು. ಜಾತ್ರಾ ಮಹೋತ್ಸವ ಕಮೀಟಿ ಅಧ್ಯಕ್ಷ ಶಿವಾನಂದ ಲೋಲೆನವರ. ರಾಘವೇಂದ್ರ ಲೋಲೆನವರ, ಲತಾ ದೇವಾಂಗ, ಮಂಜುನಾಥ ಇದ್ದರು.