Spread the love

ಧಾರವಾಡ  : ಕಲಬುರ್ಗಿಯಲ್ಲಿ ಡಾ. ಬಾಬಾ ಸಾಹೇಬಅಂಬೇಡ್ಕರವರ ಪುತ್ಥಳಿಗೆ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಬಂದಿಸಿ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರಕಾರವನ್ನು ಆಗ್ರಹಿಸಿ ಹುಬ್ಬಳ್ಳಿ – ಧಾರವಾಡ ಮಹಾನಗರ ಜಿಲ್ಲಾ , ಕಾಂಗ್ರೆಸ್‌ ಸಮಿತಿ ( ಎಸ್‌.ಸಿ . ವಿಭಾಗ ) ಪ್ರಧಾನ ಕಾರ್ಯದರ್ಶಿ ಪ್ರಕಾಶ ದೊಡ್ಡವಾಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಅಪಿ೯ಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಪ್ರಕಾಶ ದೊಡ್ಡವಾಡ ಸಮಾನತೆಗಾಗಿ ತಮ್ಮ ಜೀವನವನ್ನೆ ಸವಿಸಿ , ಇಡಿ ದೇಶದ ಶೋಷಿತ ಸಮುದಾಯಗಳಿಗೆ ಬದುಕುವ ಹಕ್ಕನ್ನು ಕೊಟ್ಟು ಮಹಾತ್ಮನಾದ ‘ ಮಹಾನಾಯಕನಿಗೆ ಕಲಬುರ್ಗಿ ನಗರದ ಕೋಟನೂರ ಗ್ರಾಮದಲ್ಲಿ ಡಾ . ಬಾಬಾ ಸಾಹೇಬ ಅಂಬೇಡ್ಕರವರ ಪುತ್ಥಳಿಗೆ ಅಪಮಾನ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರರ ಮಕ್ಕಳಿಗೆ ಸೂಕ್ತವಾದ ಭದ್ರತೆ ರಕ್ಷಣೆಯನ್ನು ಒದಗಿಸಬೇಕು . ಇನ್ನು ಮುಂದೆ ಇಂತಹ ನೀಚ್ಛ ಕೃತ್ಯ ನಡೆಯದಂತೆ ಪೋಲಿಸ್ ಭದ್ರತಾ ಇಲಾಖೆಗೆ ಸೂಕ್ತವಾದ ನಿರ್ದೇಶನ ನೀಡಿ ರಕ್ಷಣೆಯನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

ಡಾ. ಬಾಬಾ ಸಾಹೇಬ ಅಂಬೇಡ್ಕರವರಿಗೆ ಅವಹೇಳನಿಕಾರಕ ಹೇಳಿಕೆ ನೀಡುವುದು ಹಾಗೂ ಡಾ || ಬಾಬಾ ಸಾಹೇಬ ಅಂಬೇಡ್ಕರವರ ಮತ್ಥಳಿಗೆ ಅಪಮಾನ ಮಾಡುವರಿಗೆ ಗೃಹ ಸಚಿವರು ಕಾನೂನು ಬದ್ಧವಾಗಿ ಅಂತವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಹಾಗೂ ರಾಜ್ಯದ ಎಲ್ಲಾ ಡಾ ಬಾಬಾ ಸಾಹೇಬ ಅಂಬೇಡ್ಕರವರ ಮತ್ಥಳಿಗೆ ಸಿ.ಸಿ.ಕ್ಯಾಮರಾ ಅಳವಡಿಸಿ ‘ ಹಾಗೂ ಪೊಲೀಸ ಸಿಬ್ಬಂದಿಯನ್ನು ನೇಮಿಸಬೇಕು ಇನ್ನು ಮುಂದೆ ಇಂತಹ ಘಟನೆಗಳು ನಡೆದಿದ್ದು ಕಂಡು ಬಂದರೆ ಪ.ಜಾ / ಪ.ಪಂಗಡದ ಸಮಾಜ ಭಾಂದವರು ಹಾಗೂ ಡಾ. ಬಾಬಾ ಸಾಹೇಬ ಅಂಬೇಡ್ಕರ ಅಭಿಮಾನಿಗಳು ಉಗ್ರ ಹೊರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಕುಮಾರ್ ಒಕುಂದ, ಆನಂದ್ ಕೊನ್ನೂರ್, ರಾಜೇಂದ್ರ ಗಾಮನಗಟ್ಟಿ , ರಮೇಶ್ ಮುಳಗುಂದ , ಕಾರ್ತಿಕ್ ಕಾಂಬಳೆ, ಪರಶುರಾಮ್ ದೊಡ್ಡಮನಿ, ಸದಾನಂದ್ ನಿಪ್ಪಾನಿಕಲ್, ನಾರಾಯಣ್ ಮಾದರ , ಕೃಷ್ಣ ಗುಮ್ಗೊಳ್, ರಮೇಶ್ ತಳವಾರ್, ಕಾಂಗ್ರೆಸ್ ಜೀನ್ಸ್ ದಾರಿ , ರಾಜೇಂದ್ರ ಗಮನಹಟ್ಟಿ ದತ್ತಾ ದೊಡ್ಡಮನಿ ಆನಂದ್ ಮುಶನವರ, ರಮೇಶ್ ಉಳ್ಳವರ, ಕರ್ನಾಟಕ ಜನರಕ್ಷಣಾ ವೇದಿಕೆಯ ಲಕ್ಷ್ಮಣ್ ದೊಡ್ಡಮನಿ ಇನ್ನಿತರರು ಭಾಗವಹಿಸಿದ್ದರು.