Spread the love

ಬೆಂಗಳೂರು : ಎಚ್‌.ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಜನಗಣತಿ) ವರದಿಯನ್ನು ಸ್ವೀಕರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಒಕ್ಕೊರಲಿನ ನಿರ್ಣಯ ಕೈಗೊಂಡಿದದೆ.

ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ರಾಮಚಂದ್ರಪ್ಪ ನೇತೃತ್ವದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ),ಪರಿಶಿಷ್ಟ ವರ್ಗ (ಎಸ್‌ಟಿ),ಹಿಂದುಳಿದ, ಅಲ್ಪಸಂಖ್ಯಾತರ ಸಮುದಾಯದ ನಡೆಯಿತು.ಸಂಘಟನೆಗಳ ಮುಖಂಡರ ಸಭೆ ಶಾಸಕರ ಭವನದಲ್ಲಿ ನಡೆಯಿತು.

ದಾವಣಗೆರೆ ಅಥವಾ ಚಿತ್ರದುರ್ಗದಲ್ಲಿ ಡಿ.೩೦ರಂದು ಸುಮಾರು ೧೦ ಲಕ್ಷ ಜನರನ್ನು ಸೇರಿಸಿʻಅಹಿಂದʼ(ಅಲ್ಪಸಂಖ್ಯಾತ,ಹಿಂದುಳಿದ,ದಲಿತ)ಸಮಾವೇಶ ಹಮ್ಮಿಕೊಂಡು,ಶಕ್ತಿ ಪ್ರದರ್ಶನ ಮಾಡಲು ಕೂಡಾ ತೀರ್ಮಾನಿಸಲಾಗಿದೆ.