Spread the love

ಧಾರವಾಡ : ಎಸ ಡಿ ಎಮ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಮತ್ತು ಟೆಕ್ನಾಲಜಿಯು ತಮ್ಮ ಪೂಜ್ಯ ಅಧ್ಯಕ್ಷರಾದ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಜಿಯವರ ೭೫ ನೇ ಜನ್ಮದಿನವನ್ನು ಇಂದು ಪುನರ್‌ ಸಮರ್ಪಣಾ ದಿನವನ್ನಾಗಿ ಆಚರಿಸಲಾಯಿತು.

ಧಾರವಾಡ ಎಸಡಿಎಂ ಸಿಇಟಿ ಸೊಸೈಟಿಯ ಕಾರ್ಯದರ್ಶಿ ಜೀವಂಧರ ಕುಮಾರ ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಮಾಜಕ್ಕೆ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಹೆಗ್ಗಡೆಜಿಯವರ ಕೊಡಗೆಯನ್ನು ಕುರಿತು ಮಾತನಾಡಿದರು.

ಕಾಲೇಜಿನ ಪರವಾಗಿ ಪ್ರಾಶುಪಾಲರು ಡಾ.ಕೆ.ಗೋಪಿನಾಥ ಶುಭಹಾರೈಸಿದರು ಮತ್ತು ಪೂಜ್ಯ ಹೆಗ್ಗಡೆಜಿಯವರು ಸ್ಥಾಪಿಸಿದ ಉನ್ನತ ಶೈಕ್ಷಣಿಕ ಗುಣಮಟ್ಟವನ್ನು ಎತ್ತಿ ಹಿಡಿಯುವುದಾಗಿ ಪ್ರತಿಜ್ಞೆ ಮಾಡಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಎಲ್ಲಾ ಅಧ್ಯಾಪಕರು ಮತ್ತು ಸಿಬ್ಬಂದಿಗೆ ಪ್ರೊ.ವಾಸುದೇವ ಪಾರ್ವತಿ,ಪಿಆರ್‌ಒ ಅವರು ಪುನರ್‌ ಸಮರ್ಪಣೆ ಪ್ರತಿಜ್ಞೆ ಬೋಧಿಸಿದರು.