Spread the love

ಧಾರವಾಡ : ಇಂದು ರಾಷ್ಟ್ರವೀರ ದೇಶ ಪ್ರೇಮಿ,ದೇಶಕ್ಕಾಗಿ ತನ್ನ ಮಕ್ಕಳನ್ನೆ ಒತ್ತೆ ಇಟ್ಟ ನಾಡ ಪ್ರೇಮಿ ಟಿಪ್ಪು ಸುಲ್ತಾನ ಅವರ ಜನ್ಮ ದಿನವಿಂದು

ಧಾರವಾಡದಲ್ಲಿ ಟಿಪ್ಪು ಸುಲ್ತಾನ ಜಯಂತಿಯನ್ನು ಧಾರವಾಡದ ಟಿಪ್ಪು ಸುಲ್ತಾನ ವೃತದಲ್ಲಿ ಕರ್ನಾಟಕ ಹಜರತ ಟಿಪ್ಪು ಸುಲ್ತಾನ ಯುವ ಸಂಘದ ವತಿಯಿಂದ ಹಬೀಬ ಗುರಾಣಿ ರವರ ನೇತೃತ್ವದಲ್ಲಿ ಟಿಪ್ಪು ಸುಲ್ತಾನ ಭಾವಚಿತ್ರಕ್ಕೆ ಪುಷ್ಪ ಹಾಕಿ ಸಿಹಿ ಹಂಚುವ ಮೂಲಕ ಜಯಂತಿಯನ್ನು ಆಚರಣೆ ಮಾಡಲಾಯಿತ್ತು.

ಸಾಮಾಜಿಕ ಹೋರಾಟಗಾರರಾದ ಲಕ್ಷ್ಮಣ ಬಕ್ಕಾಯಿ ರವರು ಮಾತನಾಡಿ ಹೆತ್ತ ಮಕ್ಕಳನ್ನು ದೇಶಕ್ಕಾಗಿ ಒತ್ತೆ ಇಟ್ಟ ಏಕೈಕ ವ್ಯಕ್ತಿ ಟಿಪ್ಪು ಸುಲ್ತಾನ. ಸಿದ್ದರಾಮಯ್ಯರವರು ನರೇಂದ್ರ ಮೋದಿಯ ಹಾಗೆ ನೀವು ಕೂಡಾ ಎರಡು ಮುಖದ ವ್ಯಕ್ತಿ ಆಗಬೇಡಿ. ಟಿಪ್ಪು ಸುಲ್ತಾನ ಜಯಂತಿಯನ್ನು ಬಿಜೆಪಿಯವರೇ ಮಾಡಿದ್ದಾರೆ. ನೀವು ಬಿಜೆಪಿಯವರಿಗೆ ಹೆದಾರಿ ಟಿಪ್ಪು ಸುಲ್ತಾನ ಜಯಂತಿಯ ಶುಭಾಶಯವು ಸಹ ಕೋರಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದರು.

ರಾಕೆಟ್‌ ಮ್ಯಾನ,ದೇಶಕ್ಕಾಗಿ ಪ್ರಾಣ ಬಿಟ್ಟ ಏಕೈಕ ಹೋರಾಟಗಾರ ಟಿಪ್ಪು ಸುಲ್ತಾನ ಜಯಂತಿಯ ಶುಭಾಶಯ ಕೋರದ ಕಾಂಗ್ರೇಸ ಸರಕಾರ ಈ ನಡೆ ಖಂಡನೀಯ ಎಂದು ಕಾಂಗ್ರೇಸ ಮುಖಂಡರಾದ ಸಲೀಮ ಸಂಗನಮುಲ್ಲಾ ಹೇಳಿದರು.

ಕಾಂಗ್ರೇಸ ನಾಯಕರಾದ ಎಚ.ಎ.ಜಹಗೀರದಾರ ಮಾತನಾಡಿ ಕರ್ನಾಟಕ ಕಾಂಗ್ರೇಸ ಸರ್ಕಾರದಲ್ಲಿ ೧೩೬ ಶಾಸಕರು ಇದ್ರು ಕೂಡಾ ಒಬ್ಬರು ಸಹ ಟಿಪ್ಪುಸುಲ್ತಾನ ಜಯಂತಿಯ ಶುಭಾಶಯ ಕೋರಿಲ್ಲ ಇದೇ ರೀತಿಯಾದರೆ ಅಲ್ಪಸಂಖ್ಯಾತರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ ಯುವ ಸಂಘದ ಅಧ್ಯಕ್ಷರಾದ ಹಬೀಬ ಗುರಾಣಿ,ಎ.ಎಚ.ನದಾಫ,ಜಿ.ಎಚ.ತಳವಾರ, ಹಾಗೂ ಮಾಜಿ ಸೈನಿಕರಾದ ಸಿಕಂದರ,ಎಮ.ಎನ.ಪಠಾಣ,ಎ.ಎಮ.ಜಹಗೀದಾರ,ಸುಹೇಲ ಬೇಪಾರಿ,ಮುಸ್ತಫಾ ಗರಗ,ಮಹಬೂಬ ಮುಲ್ಲಾ,ಮಲ್ಲಿಕ ಗರಗ ಸೇರಿದಂತೆ ಟಿಪ್ಪು ಸುಲ್ತಾನ ಅಭಿಮಾನಿಗಳು, ಇನ್ನಿತರರು ಉಪಸ್ಥಿತರಿದ್ದರು.