ಧಾರವಾಡ : ಶಾಸಕ ಅರವಿಂದ ಬೆಲ್ಲದರವರ ಮಾಲೀಕತ್ವದ ರಾಯಪುರದಲ್ಲಿರುವ ಎಂ.ಜಿ.ಹೆಕ್ಟರ್ ಶೋರೂಮ ಇರುವ ಜಾಗದಲ್ಲಿ ಸುಮಾರು ೮೦ ಅಡಿ ಅಗಲ ೧.೫ ಕಿ.ಮೀ ಉದ್ದದ ರೈತರ ರಸ್ತೆಯನ್ನು ನಕ್ಷೆಯಲ್ಲಿ ಮಾಯಮಾಡಿ ಜಾಗಾ ಕಬಳಿಸಿದ್ದಾರೆ ಎಂದು ರಾಣಿ ಚೆನ್ನಮ್ಮ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ನಾಗರಾಜ ಗೌರಿ ಆರೋಪಿಸಿ ಲೋಕಾಯುಕ್ತ ಅದಿಕಾರಿಗಳಿಗೆ ದೂರನ್ನು ನೀಡಿದರು.
೧೩ ತಿಂಗಳು ನಂತರ ಲೋಕಾಯುಕ್ತರು ಹುಡಾ ಅಧಿಕಾರಿಗಳಿಗೆ ಉತ್ತರ ಕೇಳಿದ್ದು ಅವರು ಉತ್ತರ ಕೊಟ್ಟಿದ್ದು ಇರುತ್ತದೆ ಹಾಗೂ ನನಗೆ ಪ್ರತ್ಯುತ್ತರ ಕೇಳಿ ನೋಟೀಸ್ ಕೊಟ್ಟಿದ್ದಾರೆ.
ಶಾಸಕ ಬೆಲ್ಲೆದ ಅವರಿಗೆ ಅನುಕೂಲ ಆಗುವ ಹಾಗೆ ಮಾಡಿದ್ದಾರೆ.ಮರು ತನಿಖೆ ಮಾಡಬೇಕು ಇಲ್ಲದಿದ್ದಲ್ಲಿ ಗೃಹಮಂತ್ರಿ ಹಾಗೂ ನಗರಾಭಿವೃದ್ಧಿ ಮಂತ್ರಿಗಳಿಗೆ ದೂರನ್ನು ನೀಡಲಾಗುವುದು ಎಂದು ಹೇಳಿದರು. ಲೋಕಾಯುಕ್ತರು ನವೆಂಬರ ೨೧ ರ ಒಳಗಾಗಿ ಪ್ರತ್ಯುತ್ತರ ನೀಡಲು ಲೋಕಾಯುಕ್ತರು ನೋಟೀಸು ನೀಡಿದ್ದು ಅದಕ್ಕೆ ಲೋಕಾಯುಕ್ತ ಕಚೇರಿ ಬಂದು ಪ್ರತ್ಯುತ್ತರ ನೀಡಿದ ನಂತರ ನಮ್ಮ ಸಂಗ್ರಾಮ ಸುದ್ಧಿಗಾರರೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಮ್ಮದಅಲಿ ಮುಲ್ಲಾ, ಸಿದ್ದಲಿಂಪ್ಪ ಬಂಗಾರಿ,ಕೃಷ್ಣ ರಾಯ್ಕರ,ಉಮೇಶ್ ಇಂಡಿ,ಪಂಚಾಯ್ಯ ಹಿರೇಮಠ,ಮಲ್ಲಪ್ಪ ನಗರಹಳ್ಳಿ,ಅರ್ಜುನ ಗೊರವಿ,ನಂದಾಕಿಶೋರ,ಅನ್ವಕರ ಸಿದ್ದಪ್ಪ ಬಸನಗೌಡ,ಬಸಪ್ಪ ಮಣ್ಣಪ್ಪನವರ ಉಪಸ್ಥಿತರಿದ್ದರು.