Spread the love
ವಿನಯ ಕುಲಕರ್ಣಿ ಅಭಿಮಾನಿ ಬಳಗದ ವತಿಯಿಂದ ಇವತ್ತಿನ ದಿನ ಮಾನ್ಯ ಶ್ರೀ ವಿನಯ ಕುಲಕರ್ಣಿಯವರ ಹುಟ್ಟು ಹಬ್ಬದ ಅಂಗವಾಗಿ “ರಕ್ತದಾನ ಹಾಗೂ ಅನ್ನಸಂತರ್ಪಣೆ”ಮಾಡಲಾಯಿತು.
ಈ ರಕ್ತದಾನ ಶಿಬಿರದಲ್ಲಿ ಕಾರ್ಯಕ್ರಮದಲ್ಲಿ ನೂರಾರು ಜನರು ರಕ್ತದಾನ ಮಾಡಿದರು ಸಾವಿರಾರು ಜನರು ಅನ್ನಪ್ರಸಾದ ಮಾಡಿದರು. ಈ ಕಾರ್ಯಕ್ರಮಕ್ಕೆ ಬಂದು “ರಕ್ತದಾನ” ಮಾಡಿ ಮತ್ತು “ಅನ್ನಪ್ರಸಾದ” ಮಾಡಿ ಈ ಕಾರ್ಯಕ್ರಮ ಯಶಸ್ವಿಗೊಳಿಸಿದ ಲಾಯನ್ಸ ಹೆಲ್ತ್ ಕ್ಲಬ್ ನ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಎಲ್ಲಾ ಗೆಳೆಯರಿಗೆ ಹಾಗೂ ಅಭಿಮಾನಿಗಳಿಗೆ ಮಾಧ್ಯಮ ಮಿತ್ರರಿಗೂ ಮತ್ತು ಪೊಲೀಸ್ ಇಲಾಖೆಗೆ ಮಹಾನಗರ ಪಾಲಿಕೆ ಮತ್ತು ಮಾಧ್ಯಮ ಮಿತ್ರರಿಗೆ ಹಾಗೂ ಪರೋಕ್ಷವಾಗಿ ಅಪರೋಕ್ಷವಾಗಿ ಸಹಾಯ ಸಹಕಾರ ಮಾಡಿದ ತಮಗೆಲ್ಲರಿಗೂ ಶ್ರೀ ವಿನಯ ಕುಲಕರ್ಣಿ ಅಭಿಮಾನಿ ಬಳಗದಿಂದ ಅನಂತ ಅನಂತ ಧನ್ಯವಾದಗಳು ಎಂದು ವಿನಯ ಕುಲಕರ್ಣಿ ಅಭಿಮಾನಿ ಬಳಗದ ಅಧ್ಯಕ್ಷರಾದ ಬಸವರಾಜ ಜಾಧವರವರು ಹೇಳಿದ್ದಾರೆ.
“ತಾವು ನೀಡುತ್ತಿರುವ ಈ ಪ್ರೀತಿ ವಾತ್ಸಲ್ಯಕ್ಕೆ ನಾವು ನಿಮಗೆ ಯಾವತ್ತೂ ಚಿರಋಣಿ ಇದೆರೀತಿ ತಮ್ಮ ಸಹಾಯ ಸಹಕಾರ ತಮ್ಮ ಆಶೀರ್ವಾದ ಸದಾ ಇರಲಿ”