ಹುಬ್ಬಳ್ಳಿ : ಗೋಕುಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಗೋಕುಲ ಠಾಣೆ ಸಿ.ಪಿ.ಐ. ನೀಲ್ಲಮ್ಮನವರ, ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಸರಕಾರಿ ಶಾಲೆ ಅಭಿವೃದ್ಧಿಗೆ ಗ್ರಾಮದ ಜನರು ಶ್ರಮಿಸಬೇಕು, ಮಕ್ಕಳ ವಿದ್ಯಾಭ್ಯಾಸ ಕಡೆಗೆ ಪಾಲಕರು ಗಮನ ಹರಿಸಿ ,ಮುಬೈಲ್ ಪೋನ್ ನಿಂದ ದೂರ ಇಡಿ, ಮಕ್ಕಳನ್ನು ಪ್ರೀತಿಯಿಂದ ಬೆಳೆಸಿ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಆಗ ಮಾತ್ರ ಪಾತ್ರರಾಗಲು ಸಾದ್ಯ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಗಂಂಯ್ಯಸ್ವಾಮಿ ಹೀರೇಮಠ ವಹಿಸಿದ್ದರು.
ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಹನುಮಂತ ಚ ಉಣಕಲ್ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ
ಎಚ್.ಡಿ.ಎಮ್.ಸಿ. ಸದಸ್ಯರಾದಾ ಶಂಕರ್ ಹರಿಜನ, ರಾಮಣ ಬಡಿಗೇರ, ಪ್ರಧಾನ ಗುರು ಮಾತೇಯರು, ಊರ ಪ್ರಮುಖರು ಮಹಾದೇವಪ್ಪ ಪೂಜಾರ, ಹನುಮಂತ ಭೀ ಉಣಕಲ್, ಬಸಪ್ಪ ಯಲಿಗಾರ, ಬಾಲಪ್ಪ ಬಾದಾಮಿ, ಶೇಖಪ್ಪ ಬ್ಯಾಹಟ್ಟಿ, ಅಶೋಕ್ ಮ್ಯಾಗೇರಿ, ಎಸ್.ಡಿ.ಎಮ್.ಸಿ. ಉಪಾಧ್ಯಕ್ಷರು ಹನುಮಂತ ಹರಿಜನ, ಹಾಗೂ ಎಲ್ಲಾ ಸದಸ್ಯರು ಊರ ಪ್ರಮುಖರು ಗುರುಗಳು, ಗುರುಮಾತೇಯರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.