Spread the love

ಧಾರವಾಡ: 75 ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಧಾರವಾಡ ಇವರ ವತಿಯಿಂದ ಜಿಲ್ಲಾ ಹೊರಾಂಗಣ ಕ್ರೀಡಾ ಕ್ರೀಡಾಂಗಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಧೀಮಂತರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಅಭಿನಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಟೆಕಾಡೋ (Taekwondo) ಸಂಸ್ಥೆಯ ಕುಮಾರ್ ಮಿಲನ್ ಭಟ್ ಅವರಿಗೆ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಟೆಕಾಡೋ (Teakwondo) ಕ್ರೀಡಾಕೂಟದಲ್ಲಿ ಮಾಡಿದ ಸಾಧನೆಗಳನ್ನು ಗುರುತಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಹಾಗೂ ಅನೇಕ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು
ಆತನಿಗೆ ಮಾರ್ಗದರ್ಶಕರಾದ ಪರಪ್ಪ , ಶ್ರೀಮತಿ ಅಂಜಲಿ ಪರಪ್ಪ ಆನಂದ್ ಕಿಟ್ಟದಾಳ್ ಮತ್ತು ಶ್ರೀಮತಿ ಶೋಭಾ
ಅನುರಾಧ ಮೋಹನ್ ಕುಲಕರ್ಣಿ ರಾಜೇಶ್ವರಿ ರೇಣುಕಾ ಧನಂಜಯ್ ರಶ್ಮಿ ಗಿರೀಶ್ ರಕ್ಷಿತ್ ಸೌಮ್ಯ ಯಶ್ ಮುಂತಾದವರು ಈ ಸಂದಭ೯ದಲ್ಲಿ ಉಪಸ್ಥಿತರಿದ್ದು ಶುಭಕೋರಿದರು.