Spread the love

ಗ್ರಾ.ಪಂ ಗಳ ಕರೆ ಸಮಗ್ರ ಅಭಿವೃದ್ಧಿಗೆ ಸಿ.ಇ.ಓ. ಸ್ವರೂಪಾ ಆದೇಶ

ಧಾರವಾಡ 05 : ಜಿಲ್ಲೆಯ ಧಾರವಾಡ ತಾಲೂಕಿನ ನರೇಂದ್ರ ಮತ್ತು ಗರಗ ಗ್ರಾಮ ಪಂಚಾಯಿತಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಸ್ವರೂಪಾ ಟಿ ಕೆ ರವರು ಭೇಟಿ ನೀಡಿದರು
ಈ ಸಂದರ್ಭದಲ್ಲಿ ನರೇಂದ್ರ ಗ್ರಾಮದ ಕುಂಭಾಪುರ ಕೆರೆ ಮತ್ತು ಕೆಂಪುಗೆರೆಯನ್ನು ಸಮಗ್ರ ಅಭಿವೃದ್ಧಿಪಡಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು ಅಲ್ಲದೆ ನರೇಂದ್ರ ಗ್ರಾಮದಲ್ಲಿರುವ 7 ಕೆರೆಗಳನ್ನು ಸರ್ವೆ ಮಾಡಲು ತಹಶಿಲ್ದಾರರಿಗೆ ನಿರ್ದೇಶನ ನೀಡಿದರು.
ನಂತರ ಗರಗ ಗ್ರಾಮದ ಪಾಳಗಟ್ಟಿ ಕೆರೆಗೆ ಭೇಟಿ ನೀಡಿ ಗರಗ ಗ್ರಾಮದ ಸಮಗ್ರ ಅಭಿವೃದ್ಧಿಯ ಮಾಡುವಂತೆ ತಿಳಿಸಲಾಯಿತು.ನಂತರ ಕೆರೆ ಅಭಿವೃದ್ದಿ ಮಾಡಲು ನಾಳೆ ದಿ. 6 ರಂದು ಸಂಜೆ 4:30 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಸಂಬಂಧಿಸಿದ ಅಧಿಕಾರಿಗಳ ಜೊತೆ ಕೆರೆ ಅಭಿವೃದ್ಧಿ ಕುರಿತು ಚರ್ಚಿಸಲು ಸಭೆಯನ್ನು ಕರೆಯಾಗಿದೆ.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ಚಂದ್ರು ಪೂಜಾರ, ಆರ್.ಡಬ್ಲ್ಯೂ ಎಸ್ ( RWS) ಇಲಾಖೆಯ ಸಂಗೀತ ಕಲಬುರ್ಗಿ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಸಾರ್ವಜನಿಕರು ಹಾಜರಿದ್ದರು.