ಧಾರವಾಡ : ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್) ಹಾಗೂ ಜಯ ಕರ್ನಾಟಕ ಸಂಘಟನೆ ಧಾರವಾಡ ಜಿಲ್ಲಾ ಘಟಕ ವತಿಯಿಂದ ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿಯ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದ ವತಿಯಿಂದ ಆಯ್ಕೆಯಾದ ಹುಬ್ಬಳ್ಳಿ ಧಾರವಾಡ ಪೂರ್ವ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಹ್ಯಾಟ್ರಿಕ್ ಸೋಲಿಲ್ಲದ ಸರದಾರರಾದ ಪ್ರಸಾದ್ ಅಬ್ಬಯ್ಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ದೊಡ್ಡಮನಿ ಬ. ದೊಡ್ಡಮನಿ ಹಾಗೂ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಸುಧೀರ್ ಎಂ ಮುಧೋಳ ಮುಖಂಡರುಗಳಾದ ನಾರಾಯಣ ಮಾದರ, ಶಬ್ಬೀರ ಅತ್ತಾರ, ಹನುಮಂತ ಮೊರಬ, ಪಂಚಯ್ಯ ಪೂಜಾರ, ಕಲ್ಲಪ್ಪ ಕುಶಂಬಿ, ಪ್ರಕಾಶ್ ಹೂಗಾರ, ಮಗೆಪ್ಪ ಹೊನ್ನಾಪುರ, ಸದ್ದಾಮ ನದಾಫ, ಗಣೇಶ್ ಅಂಬಲಿಕೊಪ್ಪ, ರಮೇಶ್ ಅರಳಿಕಟ್ಟಿ, ಕೆ.ಬಿ ಕಾಂಬಳೆ, ಅಶೋಕ, ಶಾಹಿದ, ತೌಶಿಪ್, ಸಮೀರ, ಇನ್ನೂ ಅನೇಕರು ಉಪಸ್ಥಿತರಿದ್ದರು.
ಸೋಲಿಲ್ಲದ ಸರದಾರರಾದ ಪ್ರಸಾದ್ ಅಬ್ಬಯ್ಯರವರಿಗೆ ಸನ್ಮಾನ
Related Posts
ರಾಷ್ಟ್ರೀಯ ವಿಜ್ಞಾನ ದಿನಾಚರಣೆ
Spread the love ವಿಕಸಿತ ಭಾರತಕ್ಕೆ ನೂತನ ತಂತ್ರಜ್ಞಾನ ಮತ್ತು ಆವಿಷ್ಕಾರ ಸಂಶೋಧನೆಗಳ ಅವಶ್ಯಕತೆ ಇದೆ. ಹೊಸ ಅನ್ವೇಷಣೆ ಮತ್ತು ತಂತ್ರಜ್ಞಾನದಲ್ಲಿ ಯುವ ಸಂಶೋಧಕರ ಪಾತ್ರ ಬಹಳ ಇದೆ ಎಂದು *ದೆಹಲಿ ಐಐಟಿಯ ಕೆಮಿಕಲ್ ಇಂಜನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ.ಡಿ.ಪಿ…
ಆಡಳಿತಾತ್ಮಕವಾಗಿ ಅಧಿಕಾರಿಗಳು ಜನಸ ಸ್ನೇಹಿ ಆಗಿರಬೇಕು
Spread the love *ಸರಕಾರ ನೀಡುವ ಸೇವಗಳು ಸಮಯಕ್ಕೆ ಸರಿಯಾಗಿ ಜನರಿಗೆ ತಲಪಲು ಮಾಹಿತಿ ತಂತ್ರಜ್ಞಾನದ ಪಾತ್ರ ಬಹಳ ಪ್ರಮುಖವಾದ ಪಾತ್ರವಹಿಸುತ್ತದೆ* ಎಂದು ಕರ್ನಾಟಕ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಮತ್ತು ಕರ್ನಾಟಕ ಆಡಳಿತಾತ್ಮಕ ಸುಧಾರಣಾ ಆಯೋಗದ ಮಾಜಿ ಅಧ್ಯಕ್ಷರಾದ…