Spread the love

ಧಾರವಾಡ : ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್) ಹಾಗೂ ಜಯ ಕರ್ನಾಟಕ ಸಂಘಟನೆ ಧಾರವಾಡ ಜಿಲ್ಲಾ ಘಟಕ ವತಿಯಿಂದ ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿಯ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದ ವತಿಯಿಂದ ಆಯ್ಕೆಯಾದ ಹುಬ್ಬಳ್ಳಿ ಧಾರವಾಡ ಪೂರ್ವ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಹ್ಯಾಟ್ರಿಕ್ ಸೋಲಿಲ್ಲದ ಸರದಾರರಾದ ಪ್ರಸಾದ್ ಅಬ್ಬಯ್ಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ದೊಡ್ಡಮನಿ ಬ. ದೊಡ್ಡಮನಿ ಹಾಗೂ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಸುಧೀರ್ ಎಂ ಮುಧೋಳ ಮುಖಂಡರುಗಳಾದ ನಾರಾಯಣ ಮಾದರ, ಶಬ್ಬೀರ ಅತ್ತಾರ, ಹನುಮಂತ ಮೊರಬ, ಪಂಚಯ್ಯ ಪೂಜಾರ, ಕಲ್ಲಪ್ಪ ಕುಶಂಬಿ, ಪ್ರಕಾಶ್ ಹೂಗಾರ, ಮಗೆಪ್ಪ ಹೊನ್ನಾಪುರ, ಸದ್ದಾಮ ನದಾಫ, ಗಣೇಶ್ ಅಂಬಲಿಕೊಪ್ಪ, ರಮೇಶ್ ಅರಳಿಕಟ್ಟಿ, ಕೆ.ಬಿ ಕಾಂಬಳೆ, ಅಶೋಕ, ಶಾಹಿದ, ತೌಶಿಪ್, ಸಮೀರ, ಇನ್ನೂ ಅನೇಕರು ಉಪಸ್ಥಿತರಿದ್ದರು.